ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಹುಬ್ಬಳ್ಳಿಯ ನವನಗರದಲ್ಲಿದೆ. ಇದನ್ನು ಜನವರಿ, ೨೦೦೯ ರಲ್ಲಿ ಕರ್ನಾಟಕ ಸರ್ಕಾರವು ೫೫ ಎಕರೆ ಭೂಮಿಯೊಂದಿಗೆ ಸ್ಥಾಪಿಸಿತು. ವಿಶ್ವವಿದ್ಯಾನಿಲಯವು ಸಾಂವಿಧಾನಿಕ ಕಾನೂನು, ಬೌದ್ಧಿಕ ಆಸ್ತಿಯ ಹಕ್ಕುಗಳು, ವ್ಯಾಪಾರ ಮತ್ತು ವ್ಯಾಪಾರ ಕಾನೂನು, ಅಪರಾಧ ಮತ್ತು ಅಂತರರಾಷ್ಟ್ರೀಯ ಕಾನೂನುಗಳಂತಹ ವಿಷಯಗಳಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ಕಾನೂನು ಶಿಕ್ಷಣವನ್ನು ನೀಡುತ್ತದೆ. ಸಿ.ಬಸವರಾಜು ಅವರು ಈ ವಿಶ್ವವಿದ್ಯಾಲಯದ ಪ್ರಸ್ತುತ ಉಪಕುಲಪತಿಗಳು (೨೦೨೩). == ಶಿಕ್ಷಣ == === ಕಾನೂನು ಶಾಲೆ === ಕೆ‌ಎಸ್‌ಎಲ್‌ಯು, ೨೦೦೯ ರಲ್ಲಿ ಸ್ಥಾಪಿಸಲಾದ ಒಂದು ಘಟಕ ಕಾನೂನು ಶಾಲೆಯನ್ನು ಹೊಂದಿದೆ. ಕಾನೂನು ಶಾಲೆಯು ಪದವಿಪೂರ್ವ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಶಿಕ್ಷಣವನ್ನು ನೀಡುತ್ತದೆ. ಸ್ನಾತಕಪೂರ್ವ ಹಂತದಲ್ಲಿ, ಐದು ವರ್ಷಗಳ ಸಮಗ್ರ ಬ್ಯಾಚುಲರ್ ಆಫ್ ಆರ್ಟ್ಸ್, ಬ್ಯಾಚುಲರ್ ಆಫ್ ಲಾಸ್ (ಬಿ.ಎ., ಎಲ್.ಎಲ್.ಬಿ.(ಆನರ್ಸ್)) ಮತ್ತು ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನ ಶಿಕ್ಷಣವನ್ನು ನೀಡುತ್ತದೆ. ಸ್ನಾತಕೋತ್ತರ ಹಂತದಲ್ಲಿ ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಕಾನೂನು, ಕಾರ್ಪೊರೇಟ್ ಮತ್ತು ವಾಣಿಜ್ಯ ಕಾನೂನುಗಳಲ್ಲಿ ವಿಶೇಷತೆಯೊಂದಿಗೆ ಮಾಸ್ಟರ್ ಆಫ್ ಲಾಸ್ (ಎಲ್‌ಎಲ್‌. ಎಂ)ನ ಶಿಕ್ಷಣವನ್ನು ನೀಡಲಾಗುತ್ತದೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳ ಪ್ರಕಾರ ಪದವಿಪೂರ್ವ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲಾಗಿದೆ. === ಸಂಯೋಜಿತ ಕಾಲೇಜುಗಳು === ಕೆ‌ಎಸ್‌ಎಲ್‌ಯು ಡಿಸೆಂಬರ್ ೨೦೨೧ ರ ಹೊತ್ತಿಗೆ, ಅದರೊಂದಿಗೆ ೧೦೦ ಕ್ಕೂ ಹೆಚ್ಚು ಕಾಲೇಜುಗಳನ್ನು ಸಂಯೋಜಿಸಿಕೊಂಡಿದೆ. === ಸಂಶೋಧನೆ === ೨೦೧೧-೧೨ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಅಧ್ಯಯನ ಪ್ರಾರಂಭವಾಗಿದೆ. ಇಲ್ಲಿ ೨ ಸಂಶೋಧನಾ ಕೇಂದ್ರಗಳಿವೆ. == ಆವರಣ == ೨೦೧೭ ರಲ್ಲಿ ಕೆ‌ಎಸ್‌ಎಲ್‌ಯು ತನ್ನ ಕ್ಯಾಂಪಸ್‌ನಲ್ಲಿದ್ದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಇದು ಭಾರತದ ಸುಪ್ರೀಂ ಕೋರ್ಟ್‌ನ ವಾಸ್ತುಶಿಲ್ಪದ ಮಾದರಿಯಲ್ಲಿದೆ. ವಿಶ್ವವಿದ್ಯಾಲಯದ ಕಟ್ಟಡವು ಕ್ಯಾಂಪಸ್‌ನಲ್ಲಿ ೨೦ ಎಕರೆಗಳಷ್ಟು ಹರಡಿದೆ. ಇದು ೨೦ ತರಗತಿ ಕೊಠಡಿಗಳನ್ನು ಹೊಂದಿದ್ದು, ೨೦೦ ಜನರಿಗೆ ಅವಕಾಶ ಕಲ್ಪಿಸಬಹುದಾದ ಸಭಾಂಗಣ ಮತ್ತು ೫೦೦ ಆಸನಗಳೊಂದಿಗೆ ಹೊರಾಂಗಣ ಸಭಾಂಗಣವಿದೆ. == ಉಲ್ಲೇಖಗಳು ==